Events Reports
ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀಮತಿ ದೀಪಾ ಭಟ್ ಇವರಿಂದ ಭರತನಾಟ್ಯ ಕಾರ್ಯಕ್ರಮ
Date : 27-04-2017
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಮೂರನೆಯ ದಿನ ಏಪ್ರಿಲ್ 25 ರಂದು ಶ್ರೀಮತಿ ದೀಪಾ ಭಟ್, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಶಾಂತ ಕುಮಾರಿಯರವರು ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಕುಮಾರಿ ಸಾನ್ವಿ ಕಜೆ ಮತ್ತು ಕುಮಾರಿ ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.
ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀ ಶರತ್ ಸೂರ್ಯನಾರಾಯಣರಿಂದ ಭರತನಾಟ್ಯ ಕಾರ್ಯಕ್ರಮ
Date : 27-04-2017
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಎರಡನೆಯ ದಿನ ಏಪ್ರಿಲ್ 24 ರಂದು ಶ್ರೀ ಶರತ್ ಸೂರ್ಯನಾರಾಯಣ್, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕರಾದ ಪ್ರೊ.ಬಿ.ಜೆ.ಸುವರ್ಣರವರು ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಕುಮಾರಿ ಶ್ರೀಲಕ್ಷ್ಮೀ ಮತ್ತು ಕುಮಾರಿ ಶರಣ್ಯ ರೈ ಕಾರ್ಯಕ್ರಮ ನಿರ್ವಹಿಸಿದರು.
ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀಮತಿ ಕಾವ್ಯಶ್ರೀ ನಾಗರಾಜರಿಂದ ಕಥಕ್ ಕಾರ್ಯಕ್ರಮ
Date : 27-04-2017
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಮೊದಲನೆಯ ದಿನ ಏಪ್ರಿಲ್ 23 ರಂದು ಶ್ರೀಮತಿ ಕಾವ್ಯಶ್ರೀ ನಾಗರಾಜ್, ನಂದಿಬೆಟ್ಟ ಇವರಿಂದ ಕಥಕ್ ನೃತ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರೊ.ವಿ.ಬಿ ಅರ್ತಿಕಜೆ ಮತ್ತು ವಿದ್ವಾನ್ ರಾಮಕೃಷ್ಣ ಭಟ್ ಇವರು ಅಭ್ಯಾಗತರಾಗಿ ಶುಭ ಹಾರೈಸಿದರು.