ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀಮತಿ ಕಾವ್ಯಶ್ರೀ ನಾಗರಾಜರಿಂದ ಕಥಕ್ ಕಾರ್ಯಕ್ರಮ

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಮೊದಲನೆಯ ದಿನ ಏಪ್ರಿಲ್ 23 ರಂದು ಶ್ರೀಮತಿ ಕಾವ್ಯಶ್ರೀ ನಾಗರಾಜ್, ನಂದಿಬೆಟ್ಟ ಇವರಿಂದ ಕಥಕ್ ನೃತ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರೊ.ವಿ.ಬಿ ಅರ್ತಿಕಜೆ ಮತ್ತು ವಿದ್ವಾನ್ ರಾಮಕೃಷ್ಣ ಭಟ್ ಇವರು ಅಭ್ಯಾಗತರಾಗಿ ಶುಭ ಹಾರೈಸಿದರು.